ಬಾರಕೂರಿನಲ್ಲಿ ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜೂನ್ 15 , 2015
|
ಜೂನ್ 16, 2015
|
ಬಾರಕೂರಿನಲ್ಲಿ ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಬಾರಕೂರು :
ಇಲ್ಲಿನ ಕಚ್ಚೂರು ಬಬ್ಬುಸ್ವಾಮಿ ಸನ್ನಿದಾನದಲ್ಲಿ ಮಳೆಗಾಲದ ಮುಂಗಾರು ಯಕ್ಷಸಿಂಚನದ ವತಿಯಿಂದ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕ್ರುತ ಪ್ರೋ. ಎಸ್. ವಿ ಉದಯಕುಮಾರ ಶೆಟ್ಟಿ ಮತ್ತು ಮೀನುಗಾರಿಕೆಯಲ್ಲಿ ಸಾಹಸ ಮೆರೆದ ಭೋಜ ಸುವರ್ಣ ಇವರನ್ನು ಸನ್ಮಾನಿಸಲಾಯಿತು. ಅದ್ಯಕ್ಷತೆ ವಹಿಸಿ ಮಾತನಾಡಿದ ಕೋಟ ಅಮೃತೇಶ್ವರಿ ದೇವಸ್ಥಾನದ ಮುಖ್ತೇಸರ ಆನಂದ ಕುಂದರ್ ಮಾತನಾಡಿ ಮೂಲೆ ಮೂಲೆಯಲ್ಲಿ ಇರುವ ಯಕ್ಷಗಾನ ಕಲಾವಿದರನ್ನು ಗುರುತಿಸಿ ಅವರ ಪ್ರತಿಭೆಯನ್ನು ಪತ್ರಿಕೆ ಮೂಲಕ ನಾಡಿನ ಉದ್ದಗಲಕ್ಕೂ ಪರಿಚಯಿಸಿದ ಪ್ರೋ ಎಸ್. ವಿ ಉದಯಕುಮಾರ ಶೆಟ್ಟಿಯವರ ಸೇವೆ ಶ್ಲಾಘನೀಯ ಎಂದರು. ಮೇಳಗಳಲ್ಲಿ ಕಂಡುಬರುವ ಕುಂದುಕೊರತೆಗಳನ್ನು ಆಗಾಗ ಸಂಬಂದಪಟ್ಟವರ ಗಮನಕ್ಕೆ ತರುವ ಅವರ ಯಕ್ಷಗಾನ ಕಾಳಜಿ ಶ್ಲಾಘನೀಯವಾದದ್ದು ಇಂತಹ ನಿಸ್ವಾರ್ಥ ಸೇವಕರನ್ನು ಗುರುತಿಸಿ ಮೊಗವೀರ ಸಮಾಜ ಉತ್ತಮ ಕೆಲಸ ಮಾಡಿದೆ ಎಂದರು.
ಸಮುದ್ರದಲ್ಲಿ ಸಾಹಸ ಮೆರೆದ ಭೋಜ ಸುವರ್ಣರನ್ನು ಅಭಿನಂದಿಸಿದರು. ಸನ್ಮಾನಕ್ಕೆ ಉತ್ತರಿಸಿದ ಪ್ರೋ ಶೆಟ್ಟಿಯವರು ಮೊಗವೀರ ಸಮಾಜಕ್ಕೂ ನಮ್ಮ ಕುಟುಂಬಕ್ಕೂ ತಲೆತಲಾಂತರದಿಂದ ಅನ್ಯೋನ್ಯತೆಯಿದ್ದು ಇದೇ ಸಮಾಜದ ಗತಿಸಿದ ಹಿರಿಯ ಕಲಾವಿದರಾದ ಶಿರಿಯಾರ ಮಂಜು ನಾಯ್ಕ್. ಕೋಟ ವೈಕುಂಠ ಮೊಳಹಳ್ಳಿ ಹೆರಿಯ ನಾಯ್ಕ್, ಕೊಳ್ಕೆಬೈಲು ಶೀನನಾಯ್ಕರು ನಮ್ಮ ಹಿರಿಯರಿಗೆ ತುಂಬಾ ಆತ್ಮೀಯರಾಗಿದ್ದರು ಈ ಸನ್ಮಾನ ಅಂತಹ ಹಿರಿಯರಿಗೆ ಅರ್ಪಿಸುತಿದ್ದೇನೆ ಎಂದರು.
ಉದ್ಯಮಿ ಗಣೇಶ ಪುತ್ರನ್, ಮೊಗವೀರ ಯುವಘಟಕದ ಅದ್ಯಕ್ಷ ಸದಾನಂದ ಬಳ್ಕೂರ್, ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಶ್ರೀಯಾನ , ಉದ್ಯಮಿ ಗೋಪಾಲ ಶೆಟ್ಟಿ ಹೊಸಮಠ, ಕ್ರಷ್ಣಮೂರ್ತಿ ಸಾಲಿಗ್ರಾಮ, ಗೋಕುಲದಾಸ್ ಬಾರ್ಕೂರು ಮುಂತಾದವರು ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಅನೇಕ ಮೊಗವೀರ ಸಮಾಜದ ಗಣ್ಯರು ಆಗಮಿಸಿಶುಭ ಹಾರೈಸಿದರು. ಮೊಳಹಳ್ಳಿ ಅಕ್ಷಯ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು ಹೊಸಮಠದ ದರ್ಮಶ್ರೀ ಫ಼ಿಸಿಂಗ್ ಫ಼್ರೆಂಡ್ಸ್ ಕಾರ್ಯಕ್ರಮ ವ್ಯವಸ್ಥೆ ಮಾಡಿದ್ದರು, ಬಳಿಕ ಪ್ರಸಿದ್ದ ಕಲಾವಿದರಿಂದ ಯಕ್ಷಗಾನ ನೆರವೇರಿತು.
|
|
|